SEARCH

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policies, and Terms of Service.

    ಕರ್ನಾಟಕ - ತಮಿಳುನಾಡು ರಾಜ್ಯಗಳ ನಡುವೆ ದಕ್ಷಿಣ ಪಿನಾಕಿನಿ ನದಿ ವಿವಾದ (Pinakini)

    1 day ago

    ಕರ್ನಾಟಕ - ತಮಿಳುನಾಡು ರಾಜ್ಯಗಳ ನಡುವೆ ದಕ್ಷಿಣ ಪಿನಾಕಿನಿ ನದಿ ವಿವಾದ 

    • ಕಾವೇರಿ ಬಳಿಕ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ದಕ್ಷಿಣ ಪಿನಾಕಿನಿ ಅಥವಾ ಪೆನ್ನಾರ್ ನದಿಯ ನೀರು ಹಂಚಿಕೆ ವಿವಾದ ಎಬ್ಬಿತ್ತು. 
    • ಇದೀಗ ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ಪುರಸ್ಕರಿಸುವ ಮೂಲಕ ಕರ್ನಾಟಕಕ್ಕೆ ಹಿನ್ನಡೆ ಆಗಿದೆ. 

    ಸುಪ್ರೀಂ ತೀರ್ಪು ಏನು?  

    • ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ಜಲ ವಿವಾದ ನ್ಯಾಯಾಧೀಕರಣ ರಚಿಸುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಫೆಬ್ರವರಿ 2ರಂದು ತೀರ್ಪು ನೀಡಿದೆ. 
    • ಜಲವಿವಾದ ನ್ಯಾಯಾಧೀಕರಣ ರಚಿಸುವಂತೆ ಆದೇಶ ಹೊರಡಿಸಿದೆ. ಆದೇಶ ಪ್ರಕಟವಾದ 1 ತಿಂಗಳೊಳಗೆ ನ್ಯಾಯಾಧೀಕರಣ ರಚನೆಗೆ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. 
    • ಪೆನ್ನಾರ್‌ ನದಿ ಮತ್ತು ಅದರ ಉಪ ನದಿ ಮಾರ್ಕಾಂಡೇಯ ನದಿ ಪಾತ್ರದಲ್ಲಿ ಕರ್ನಾಟಕ ಸರಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದನ್ನು ವಿರೋಧಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. 
    • ತಮಿಳುನಾಡು ನಡೆಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ್ದು, ‘‘ಕರ್ನಾಟಕ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ
    • ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. 
    • ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ,’’ ಎಂದು ವಾದಿಸಿತ್ತು. 
    • ಆದರೆ ಇದೀಗ ಕರ್ನಾಟಕದ ಯೋಜನೆಗಳಿಗೆ ಹಿನ್ನಡೆಯಾಗಿದ್ದು, ತಾತ್ಕಾಲಿಕ ತಡೆ ಬೀಳಲಿದೆ. 
    • ನ್ಯಾಯಾಧೀಕರಣ ರಚನೆಯಾದ ಬಳಿಕ ಅದರ ತೀರ್ಮಾನದಂತೆ ಕರ್ನಾಟಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. 

    ದಕ್ಷಿಣ ಪಿನಾಕಿನಿ ನದಿ ಹರಿಯುವುದೆಲ್ಲಿ?

    • ದಕ್ಷಿಣ ಪಿನಾಕಿನಿಯು ನಂದಿ ಬೆಟ್ಟಗಳಲ್ಲಿ ಹುಟ್ಟಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಜಲಮೂಲವಾಗಿದೆ. 
    • ಅಲ್ಲದೆ ದಕ್ಷಿಣ ಪಿನಾಕಿನಿ ನದಿಗೆ ಮಾರ್ಕಂಡೇಯ ನದಿ, ಯರಗೋಳ, ಕುಶಾವತಿ ಎಂಬ ಉಪನದಿಗಳೂ ಇವೆ. 
    • ಪೆನ್ನಾರ್ ನದಿಯು ಒಂದು ಹರಿವಿನ ದಿಕ್ಕು ಆಂಧ್ರಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರಿದರೆ, ಇನ್ನೊಂದು ಭಾಗ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿಗೆ ಸೇರುತ್ತದೆ.

    ಕರ್ನಾಟಕದಿಂದ-ತಮಿಳುನಾಡಿಗೆ ಹರಿವು ಹೇಗೆ?  

    • ಈ ನದಿಯಿಂದ ಬೆಂಗಳೂರು ಸುತ್ತಲಿನ ಹೊಸಕೋಟೆ, ಬೆಳ್ಳಂದೂರು, ವರ್ತೂರು, ಬಾಗಲೂರು, ಮೂಲಕ ತಮಿಳುನಾಡಿನ ಹೊಸೂರು ಸಮೀಪ ಕೆಳವಾರಿಪಲ್ಲಿ ಎಂಬ ಜಲಾಶಯಕ್ಕೆ ಹರಿದು ಅಲ್ಲಿಂದ ಕೃಷ್ಣಗಿರಿ ಡ್ಯಾಂ, ಕಾವೇರಿ ಪಟ್ಟಣ, ಸಾತನೂರು ಡ್ಯಾಂ, ಮುಡಿಯನೂರು ಮೂಲಕ ಕಡಲೂರು ಬೀಚ್‌ನಲ್ಲಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 
    • ಆದರೆ ಬೆಂಗಳೂರಿನಲ್ಲಿರುವ ದಕ್ಷಿಣ ಪಿನಾಕಿನಿಯ ಜಲಾನಯನ ಪ್ರದೇಶಗಳಾದ ಬೆಳ್ಳಂದೂರು, ವರ್ತೂರು ಕೆರೆಗಳು ಕೈಗಾರಿಕೆಗಳ  ತ್ಯಾಜ್ಯದಿಂದ ಸಂಪೂರ್ಣ ಕಲುಶಿತಗೊಂಡಿವೆ. 
    • ರಾಜ್ಯದಲ್ಲಿ ಮಾತ್ರವಲ್ಲದೆ ಹೊಸೂರು, ಚೆಂಗಂ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಡಾ ದಕ್ಷಿಣ ಪಿನಾಕಿನಿಯ ಒಡಲನ್ನು ಸೇರಿದೆ. 

    ವಿವಾದಕ್ಕೊಳಗಾದ ಯೋಜನೆ ಯಾವುದು?   

    • ಕರ್ನಾಟಕವು ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದಕ್ಕೆ ತಮಿಳುನಾಡು ವಿರೋಧಿಸಿದೆ.
    •  ಅಲ್ಲದೆ ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆ ಹಾಗೂ ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳಿಗೆ ವಿರೋಧ ವ್ಯಕ್ತವಾಗಿತ್ತು. 
    • ಈ ಯೋಜನೆಗಳಿಂದ ತಮಿಳುನಾಡು ರೈತರಿಗೆ ನೀರಿನ ಕೊರತೆ ಆಗುತ್ತದೆಯೆಂದು ವಾದಿಸಿತ್ತು. 
    • ಈ ವಿವಾದ 2018 , ಮೇ ತಿಂಗಳಿಂದಲೇ ಆರಂಭವಾಗಿತ್ತು. 
    • ಆದರೆ ಕೋಲಾರದ ಯರಗೋಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಸರಕಾರವೇ ಅನುಮೋದನೆ ನೀಡಿತ್ತು. 
    • 240 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಜಲಾಶಯದಲ್ಲಿ ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುತ್ತದೆ. 
    • ಇದರಿಂದಲೂ ತಮಿಳುನಾಡಿಗೆ ಪ್ರತಿ ವರ್ಷ 10 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಲಾಗಿತ್ತು. 
    • ರಾಜ್ಯವು 7.5 ಟಿಎಂಸಿ ನೀರು ಮಾತ್ರ ಹರಿಸಿದ್ದರಿಂದ ನ್ಯಾಯಮಂಡಳಿಯ ಸ್ಥಾಪನೆಗೆ ತಮಿಳುನಾಡು ಪಟ್ಟು ಹಿಡಿದಿತ್ತು, ಆ ಪ್ರಕಾರ ಈಗ ನ್ಯಾಯಾಧೀಕರಣ ರಚನೆಯಾಗಿದೆ.
    Click here to Read More
    Previous Article
    ವಿಶ್ವ ತೇವಭೂಮಿ ದಿನ (World Wetlands Day)

    Related ಪ್ರಚಲಿತ ಘಟನೆಗಳು (CAs) Updates:

    Comments (0)

      Leave a Comment